D Boss Darshan Caseಗೆ Big Twist! ಕೋರ್ಟ್ ಬದಲಾವಣೆ.. ಹೊಸ ತಿರುವು ಕೊಟ್ಟ ಮಹತ್ವದ ಬೆಳವಣಿಗೆ

NS CREATION FF
0

 


ಈ ಒಂದು ಕಷ್ಟದ ಸಮಯದಲ್ಲೂ ನಟ ದರ್ಶನ್ ಮತ್ತು ದರ್ಶನ್ ಫ್ಯಾನ್ಸ್ ಗಳಿಗೆ ಕೊಂಚ ರಿಲೀಫ್ ಕೊಡುವಂತ ಸುದ್ದಿ ಒಂದು ಕೇಳಿ ಬರ್ತಿದೆ. ಈಗಾಗಲೇ ರೇಣುಕಸ್ವಾಮಿ ಕೊಲೆ ಕೇಸ್ನ ಟ್ರಯಲ್ ಶುರುವಾಗಿದ್ದು ಮೊನ್ನೆ ತಾನೇ ರೇಣುಕಸ್ವಾಮಿ ಕೇಸ್ನ ನ್ಯಾಯಾಧೀಶರ ಬದಲಾವಣೆ ಕೂಡ ಆಗಿದ್ದು ಈಗ ಹೊಸದಾಗಿ ನ್ಯಾಯಾಧೀಶ ಸುಜಾತಾ ಮಡಿವಾಲಪ್ಪ ಸಮರಾಣಿ ಯವರು ವಿಚಾರಣೆಯನ್ನ ನಡೆಸುತ್ತಿದ್ದು ಜೂನ್ ಒಂದರಿಂದಲೇ ನಟ ದರ್ಶನ್ ಅವರ ಕೇಸ್ನ ವಿಚಾರಣೆ ತ್ವರಿತಗತಿಯಲ್ಲಿ ಆರಂಭವಾಗಿದೆ ಅಂತನೆ ಹೇಳಬಹುದಾಗಿದೆ. ಇದೀಗ ವೀಕ್ಷಕರೇ ನಟ ದರ್ಶನ್ ಅವರಿಗೆ ಮತ್ತೊಂದು ರಿಲೀಫ್ ಕೊಡುವಂತ ಸುದ್ದಿ ಕೇಳಿ ಬರ್ತಿದ್ದು 60 ಸಾಕ್ಷಿಗಳ ವಿಚಾರಣೆಯನ್ನ ಕೇವಲ ಎರಡು ತಿಂಗಳಲ್ಲಿ ಮುಕ್ತಾಗೊಳಿಸುವುದಕ್ಕೆ ದರ್ಶನ್ ಪರ ವಕೀಲರು ಕೋರ್ಟ್ನ ಬಳಿ ರಿಕ್ವೆಸ್ಟ್ ಅನ್ನ ಮಾಡಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ.


 ಈಗಾಗಲೇ ಸುಪ್ರೀಂ ಕೋರ್ಟ್ ಒಂದು ವರ್ಷದೊಳಗೆ ವಿಚಾರಣೆಯನ್ನ ಮುಗಿಸುವುದಕ್ಕೆ ಕಾಲಾವಕಾಶವನ್ನ ಕೊಟ್ಟಿದ್ದು ಹೈಕೋರ್ಟ್ನ ನ್ಯಾಯಾಧೀಶರು ಕೂಡ ತ್ವರಿತ ಗತಿಯಲ್ಲೇ ವಿಚಾರಣೆಯನ್ನ ಮುಂದುವರಿಸಿದ್ದಾರೆ. ಆದರೆ 60 ಸಾಕ್ಷಿಗಳನ್ನ ದಿನಕ್ಕೆ ಎರಡರಿಂದ ನಾಲ್ಕು ಸಾಕ್ಷಿಗಳಂತೆ ವಿಚಾರಣೆಯನ್ನ ನಡೆಸುವಂತೆ ದರ್ಶನ್ ಪರ ವಕೀಲರು ಕೋರ್ಟಿನ ಬಳಿ ಮನವಿಯನ್ನ ಮಾಡಿಕೊಂಡಿದ್ದು ಇದು ನಿಜಕ್ಕೂ ನಟ ದರ್ಶನ್ ಅವರಿಗೆ ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು ಯಾಕಂದ್ರೆ ಮುಖ್ಯವಾದ ಸಾಕ್ಷಿಗಳಾಗಿರುವಂತಹ ರೇಣುಕಸ್ವಾಮಿ ಕುಟುಂಬಸ್ಥರು ಈಗಾಗಲೇ ನ್ಯೂಟ್ರಲ್ ಹೇಳಿಕೆಯನ್ನ ಕೊಟ್ಟಿದ್ದು.

 ಇನ್ನಿತರ ಸಾಕ್ಷಿಗಳು ಅಷ್ಟೊಂದು ಇಂಪಾರ್ಟೆಂಟ್ ಸಾಕ್ಷಿಗಳು ಕೂಡ ಅಲ್ಲ ಅಂತ ಹೇಳಲಾಗ್ತಿದೆ. ಸೋ ವೀಕ್ಷಕರೇ ಇನ್ನು ಎರಡು ಅಥವಾ ಮೂರು ತಿಂಗಳಲ್ಲಿಗೆ ಈ ಒಂದು ಟ್ರಯಲ್ ಕಂಪ್ಲೀಟ್ ಆಗಿ ಮುಕ್ತಾಯವಾಗಲಿದ್ದು ದರ್ಶನ್ ಪರ ವಕೀಲರಿಗೆ ವಾದ ಮಾಡುವಂತಹ ಅವಕಾಶ ಸದ್ಯದಲ್ಲೇ ಸಿಗಲಿದೆ ಅಂತ ಹೇಳಬಹುದಾಗಿದೆ. ಸೋ ವೀಕ್ಷಕರೇ ಯಾರೆಲ್ಲ ಆದಷ್ಟು ಬೇಗ ನಟ ಡಿ ಬಾಸ್ ದರ್ಶನ್ ಈ ಒಂದು ಆರೋಪದಿಂದ ಮುಕ್ತರಾಗಿ ಜೈಲಿಂದ ಹೊರ ಬರಲಿ.



Post a Comment

0Comments

Post a Comment (0)
To Top